ಪ್ರಾಣಾಯಾಮ

ಪ್ರಾಣಾಯಾಮ ಮಾಡುವಾಗ ಶರೀರ ನೇರವಾಗಿರುವುದು ಬಹಳ ಪ್ರಮುಖವಾಗಿರುತ್ತದೆ. ಕಾರಣ ನಾವು ಶರೀರದ ಒಳಗೆ ತೆಗೆದುಕೊಳ್ಳುವ ಪ್ರಾಣ ಶಕ್ತಿಯು ಶರೀರದ ಎಲ್ಲಾ ಭಾಗಗಳಿಗೂ ಸರಾಗವಾಗಿ ಹರಿಯುವ ಅವಶ್ಯಕತೆ ಇರುತ್ತದೆ. ಶರೀರವನ್ನು ಬಾಗಿಸಿದಾಗ ಅದು ಸಾಧ್ಯವಾಗುವುದಿಲ್ಲ.

ಪ್ರಾಣಾಯಾಮ ಮಾಡುವಾಗ ಶರೀರ ನೇರವಾಗಿರುವುದು ಬಹಳ ಪ್ರಮುಖವಾಗಿರುತ್ತದೆ. ಕಾರಣ ನಾವು ಶರೀರದ ಒಳಗೆ ತೆಗೆದುಕೊಳ್ಳುವ ಪ್ರಾಣ ಶಕ್ತಿಯು ಶರೀರದ ಎಲ್ಲಾ ಭಾಗಗಳಿಗೂ ಸರಾಗವಾಗಿ ಹರಿಯುವ ಅವಶ್ಯಕತೆ ಇರುತ್ತದೆ. ಶರೀರವನ್ನು ಬಾಗಿಸಿದಾಗ ಅದು ಸಾಧ್ಯವಾಗುವುದಿಲ್ಲ.

ಇನ್ನೊಂದು ಪ್ರಮುಖವಾದ ಕಾರಣ ನಾವು ತೆಗೆದುಕೊಳ್ಳುವ ಉಸಿರಿನಲ್ಲಿರುವ ಪ್ರಾಣವು ಶರೀರವನ್ನು ಪ್ರವೇಶಿಸಿದ ನಂತರ ಮೇರು ದಂಡದ(ಸ್ಪೈನಲ್‌)ಮೂಲಕ ಸಹಸ್ರಾರ ಚಕ್ರವನ್ನು (ತಲೆಯ ನೆತ್ತಿಯಲ್ಲಿರುವ) ತಲುಪುತ್ತಿರುತ್ತದೆ. ಈ ಸಂದರ್ಭದಲ್ಲಿ ಬೆನ್ನನ್ನು ಬಾಗಿಸಿದ್ದೇ ಆದಲ್ಲಿ ಪ್ರಾಣಶಕ್ತಿಯ ಊಧ್ರ್ವ ಮುಖ(ಮೇಲ್ಮುಖ) ಚಲನೆ ಕುಂಠಿತವಾಗುತ್ತದೆ. ಆ ಕಾರಣಕ್ಕೆ ಪ್ರಾಣಾಯಾಮವನ್ನು ಮಾಡುವಾಗ ಬೆನ್ನು ನೇರವಾಗಿರಬೇಕು.

ಯಾರಿಗೆ ನೆಲದ ಮೇಲೆ ನೇರ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಂತಹವರು(ಮಂಡಿ ಮತ್ತು ಸೊಂಟದ ನೋವು ಇರುವವರು) ಪೃಷ್ಠದ ಕೆಳಗೆ ಒಂದು ಜಮಖಾನವನ್ನು ಮಡಚಿ ಇಟ್ಟುಕೊಳ್ಳಬಹುದು ಅಥವಾ ಚಿತ್ರದಲ್ಲಿ ತೋರಿಸಿರುವಂತೆ ಮರದ ಇಟ್ಟಿಗೆಗಳನ್ನು ಇಟ್ಟುಕೊಂಡು ಕುಳಿತುಕೊಳ್ಳಬಹುದು.

ಪ್ರಾಣಯಾಮ ಮಾಡಿದರೆ ಈ ಪ್ರಯೋಜನ ಪಡೆಯಬಹುದು
* ರಕ್ತ ಸಂಚಾರ ಅಧಿಕವಾಗುತ್ತದೆ.
*ಹೃದಯ ಸಂಬಂಧಿ ಕಾಯಿಲೆ ಬರದಂತೆ ತಡೆಯುತ್ತದೆ.
* ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ.
*ಏಕಾಗ್ರತೆ ಹೆಚ್ಚುವುದು.
* ಮಾನಸಿಕ ಒತ್ತಡ, ಖಿನ್ನತೆ, ಬೇಗನೆ ಸಿಟ್ಟು ಬರುವುದು ಈ ಸಮಸ್ಯೆಗಳಿಂದ ಬಿಡುಗಡೆಯಾಗಬಹುದು.
* ಅಸ್ತಮಾ, ತಲೆನೋವು, ಮೈಗ್ರೇನ್‌, ಗ್ಯಾಸ್ಟ್ರಿಕ್‌ ಸಮಸ್ಯೆ ಕಾಡುವುದಿಲ್ಲ.
* ರಕ್ತ ಸಂಚಾರ ಸರಾಗವಾಗಿ ನಡೆಯುವಂತೆ ಮಾಡುವುದು.

ಪ್ರಾಣಾಯಾಮದ ಪ್ರಮುಖ ಅಂಶಗಳು
ಪ್ರಾಣಾಯಾಮ 3 ಸರಳ ಹಂತಗಳನ್ನು ಒಳಗೊಂಡಿದೆ. ಅವು ಯಾವುವೆಂದರೆ:

1. ಪೂರಕ ಅಥವಾ ಉಚ್ಛ್ವಾಸ (ಉಸಿರು ಒಳಗೆ ತೆಗೆದುಕೊಳ್ಳುವುದು)
2. ಕುಂಭಕ (ಉಚ್ಛ್ವಾಸದ ಉಸಿರನ್ನು ಒಳಗೇ ಹಿಡಿದಿಟ್ಟುಕೊಳ್ಳುವುದು)
3. ರೇಚಕ ಅಥವಾ ನಿಶ್ವಾಸ (ಉಸಿರು ಹೊರಗೆ ಬಿಡುವುದು)

ಆರೋಗ್ಯ ಭಾಗ್ಯದ ಸೂತ್ರ ಪ್ರಾಣಾಯಾಮ

ಪ್ರಾಣಾಯಾಮದ ಕ್ರಿಯೆ
ನಿಧಾನಗತಿಯ ಆಳವಾದ ಉಚ್ಛ್ವಾಸದಿಂದ ದೇಹಕ್ಕೆ ಸಾಕಾಗುವಷ್ಟು ಆಮ್ಲಜನಕವನ್ನು ಒಳಗೆಳೆದು ಕೊಳ್ಳಲು ಸಾಧ್ಯವಾಗುತ್ತದೆ. ನಂತರ ಕುಂಭಕದ ಸ್ಥಿತಿಯಲ್ಲಿ ಉಚ್ಛ್ವಾಸದ ಉಸಿರನ್ನು ಒಳಗೇ ಹಿಡಿದಿಟ್ಟುಕೊಳ್ಳುವುದರಿಂದ ದೇಹ ತನಗೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಹೀರಿಕೊಳ್ಳುತ್ತದೆ.

ನಂತರ ನಿಶ್ವಾಸ ಹಂತದಲ್ಲಿ ಶ್ವಾಸಕೋಶಗಳ ಮೂಲಕ ನಿಧಾನವಾಗಿ ಬಿಡುವ ಶ್ವಾಸದಿಂದ ದೇಹದಲ್ಲಿನ ಕಲ್ಮಶಗಳು ಹೊರಹಾಕಲ್ಪಡುತ್ತವೆ. ಪ್ರಾಣಾಯಾಮದ ಅತಿ ಪ್ರಮುಖ ಪ್ರಯೋಜನಗಳು

ಹೃದಯ ರಕ್ತನಾಳಗಳ ಆರೋಗ್ಯ ಸುಧಾರಣೆ
ಪ್ರಾಣಾಯಾಮದಿಂದ ರಕ್ತ ಪರಿಚಲನೆ ಸುಧಾರಣೆಯಾಗುತ್ತದೆ ಹಾಗೂ ರಕ್ತದಲ್ಲಿನ ಆಮ್ಲಜನಕ ಮಟ್ಟ ಹೆಚ್ಚಾಗುತ್ತದೆ. ನಿಯಮಿತ ಪ್ರಾಣಾಯಾಮ ಮಾಡುವುದರಿಂದ ಹೃದಯ ರಕ್ತನಾಳಗಳು ಬಲಗೊಂಡು ಆರೋಗ್ಯ ವೃದ್ಧಿಯಾಗುತ್ತದೆ.

ಅಧಿಕ ರಕ್ತದೊತ್ತಡ ನಿವಾರಣೆ
ದೇಹಕ್ಕೆ ವಿಶ್ರಾಂತಿ ನೀಡುವ ಹಾಗೂ ಮಾನಸಿಕ ಒತ್ತಡ ನಿವಾರಿಸುವ ಪ್ರಾಣಾಯಾಮದಿಂದ ಅಧಿಕ ರಕ್ತದೊತ್ತಡ ಸಹಜವಾಗಿಯೇ ನಿಯಂತ್ರಣವಾಗುತ್ತದೆ.

ಅಧಿಕ ರಕ್ತದೊತ್ತಡ ಸಮಸ್ಯೆಯ ನಿಯಂತ್ರಣಕ್ಕೆ ಆಯುರ್ವೇದ ಚಿಕಿತ್ಸೆ

ಶ್ವಾಸಕೋಶಗಳ ಬಲವರ್ಧನೆ
ಶ್ವಾಸಕೋಶಗಳನ್ನು ಬಲಗೊಳಿಸುವುದು ಪ್ರಾಣಾಯಾಮದ ಅತಿ ಪ್ರಮುಖ ಪ್ರಯೋಜನವಾಗಿದೆ. ಶ್ವಾಸಕೋಶ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಪ್ರಾಣಾಯಾಮ ಸಿದ್ಧ ಸೂತ್ರವಾಗಿದೆ. ಉಸಿರಾಟದ ಸಮಸ್ಯೆ ಇರುವವರು ಅಥವಾ ಅಸ್ತಮಾದಿಂದ ಬಳಲುವವರಿಗೆ ಪ್ರಾಣಾಯಾಮದಿಂದ ಸಾಕಷ್ಟು ಪ್ರಯೋಜನಗಳಿವೆ.

ಖಿನ್ನತೆ ನಿವಾರಕ
ಇತ್ತೀಚಿನ ಆಧುನಿಕ ಜೀವನ ಶೈಲಿಯಿಂದ ಖಿನ್ನತೆಯ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಖಿನ್ನತೆಯಿಂದ ಬಳಲುವ ವ್ಯಕ್ತಿಯ ಕಾರಣದಿಂದ ಆತನ ಕುಟುಂಬ ಹಾಗೂ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸುವುದನ್ನು ಕಾಣುತ್ತಿದ್ದೇವೆ. ನಿತ್ಯದ ಒತ್ತಡದ ಜೀವನಶೈಲಿಯಲ್ಲಿ ಒಂದಿಷ್ಟು ಸಮಯವನ್ನು ಪ್ರಾಣಾಯಾಮಕ್ಕೆ ಮೀಸಲಿಟ್ಟಲ್ಲಿ ಖಿನ್ನತೆ ಹಾಗೂ ಉದ್ವೇಗಗಳು ಕಾಣಿಸಿಕೊಳ್ಳದಂತೆ ಮಾಡಬಹುದು. ಒಟ್ಟಾರೆ ಮಾನಸಿಕ ಆರೋಗ್ಯಕ್ಕೆ ಪ್ರಾಣಾಯಾಮ ಬೇಕೇ ಬೇಕು.

ಯೋಗ ಮ್ಯಾಟ್‌ ಅಥವಾ ಚಾಪೆಯಲ್ಲಿ ಕುಳಿತು ಶರೀರ, ತಲೆ ಮತ್ತು ಕುತ್ತಿಗೆಯನ್ನು ನೇರವಾಗಿ ಮತ್ತು ಅಚಲವಾಗಿ(ಯಾವುದೇ ಚಲನೆ ಇಲ್ಲದಂತೆ) ಇಟ್ಟುಕೊಂಡು ತನ್ನ ಮೂಗಿನ ತುದಿಯಲ್ಲಿ ದೃಷ್ಟಿಯನ್ನು ನಿಲ್ಲಿಸಿ ಮತ್ತು ದೃಷ್ಟಿ ಬೇರೆ ಯಾವ ಕಡೆಯೂ ಹೋಗದಂತೆ ಗಮನ ಹರಿಸಿ.